ತಂಗಾಳಿ-ಶೋಕ


ಮುಂಜಾನೆಯ ತಂಗಾಳಿ
ಶೋಕಕೆ ದೂಡಿದೆ ನನ್ನನು
ತರಗೆಲೆಯೊಂದು ಹಾರಿ
ಬಂದು ನೆನಪಿಸಿದೆ ನಿನ್ನನು

ಹಿತವಾದ ತಂಗಾಳಿಗೆ
ಪುಳಕಗೊಂಡಿದ್ದೆ ಆ ದಿನ
ಎಲ್ಲ ಜಂಜಡಗಳ ತುಸು
ಮರೆತು ನಲಿದಿತ್ತು ಮನ

ನಗುತಿದ್ದ ಕಮಲವನು
ಯಾರೋ ತುಳಿದು ಹೋದಂತೆ
ನಲಿಯುತ್ತಿದ್ದ ಮನಕೆ
ಎರಗಿತೊಂದು ಸುದ್ದಿ ಸಿಡಿಲಿನಂತೆ

ಏಕಾಂಗಿಯಾಗಿಸಿ ನನ್ನನು
ಏಕೆ ಹೊರಟು ಬಿಟ್ಟೆ ನೀನು
ನನ್ನ ಹೊರತು ಆ ನಾಕ
ನಿನಗೆ ನೆಮ್ಮದಿ ಅನಿಸುವುದೇನು?

ಈ ತಂಪು ತಂಗಾಳಿಗೂ
ಜೀವ ಬೇಯುತಿದೆ ಈಗ
ವಿರಹದ ಉರಿ ಅಗ್ನಿಗೆ
ತುಪ್ಪವಾಗಿದೆ ತಂಗಾಳಿಯಿಗ
~ಪ್ರಕಾಶ್

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ