Posts

Showing posts from April, 2020

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಎಲ್ಲರಿಗೂ ನಮಸ್ಕಾರ! ನಾವು ಶರೀಫರ ಹಲವು ತತ್ವಪದಗಳನ್ನ ಸಿ ಅಶ್ವತ್ಥ್, ರಘು ದೀಕ್ಷಿತ್‌ರ ಸಂಗೀತದಲ್ಲಿ ಕೇಳಿ ಆನಂದಿಸಿದ್ದೇವೆ. ಆ ಸಾಲುಗಳಲ್ಲಿ ಮೈಮರೆತಿದ್ದೇವೆ. ಅರ್ಥ ಹುಡುಕಲು ಹೋಗಿ ಕೆಲವೊಮ್ಮೆ ಸೋತಿದ್ದೇವೆ, ಕೆಲವೊಮ್ಮೆ ಅಚ್ಚರಿಗೊಂಡಿದ್ದೇವೆ. ಆದರೆ ಬಹುತೇಕ ಜನರಿಗೆ ತಿಳಿಯದ ಸಂಗತಿ ಏನೇಂದರೆ. ಶರೀಫರು ಕೇವಲ ತತ್ವಪದಗಳನ್ನಷ್ಟೇ ರಚಿಸಲಿಲ್ಲ, ಇತರ ಸಾಹಿತ್ಯ ಪ್ರಕಾರದಲ್ಲೂ ಸಾಹಿತ್ಯ ರಚಿಸಿದ್ದಾರೆ. ಆ ಸಾಹಿತ್ಯ ಬಹುತೇಕ ಅಜ್ಞಾತವಾಗಿ ಉಳಿದಿದೆ. ಹೀಗೆ ಅವರ ಸಾಹಿತ್ಯದ ಬಗ್ಗೆ ಚಿಂತನೆ ನಡೆಸುವಾಗ ನೆನಪಾಗಿದ್ದು ಶಂಕರಾಚಾರ್ಯರ "ಶಿವಾಪರಾಧ" ಸ್ತೋತ್ರ" ನಾಳೆ 'ವೈಶಾಖಮಾಸ ಶುಕ್ಲಪಕ್ಷದ ಪಂಚಮಿ' ಅಂದರೆ 'ಶಂಕರರ ಜಯಂತಿ'. ಅವರು ರಚಿಸಿದ ಈ 'ಶಿವಾಪರಾಧ ಸ್ತೋತ್ರ'ವನ್ನು ನಮ್ಮ ಶರೀಫರು ಕನ್ನಡಿಕರೀಸಿದ್ದಾರೆ. ಅದೂ ಷಟ್ಪದಿಯ ರೂಪದಲ್ಲಿ. ಈ ಕಾವ್ಯ ಅದೇಕೆ ಸಾಹಿತ್ಯ ಪ್ರೀಯರಲ್ಲಿ ಹೆಚ್ಚು ಚರ್ಚೆಗೆ ಒಳಗಾಗಲಿಲ್ಲವೋ ಗೊತ್ತಿಲ್ಲ. ಈಗ ಅದನ್ನು ಸಂಗ್ರಹಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಏನಾದರೂ ತಪ್ಪುಗಳಿದ್ದರೆ ತಿಳಿದವರು ತಿಳಿಸಿ, ತಿದ್ದಿಕೊಳ್ಳುವೆ. ಶರೀಫರ ಆ ಕಾವ್ಯ ಕೆಳಗಿದೆ, ಓದಿ, ಅಭಿಪ್ರಾಯ ತಿಳಿಸಿ. ಧನ್ಯವಾದ ಜಯತು ಗಣಪತಿ ಜ್ಞಾನ ದಿನಮಣಿ | ಜಯತು ಸರಸ್ವತಿ ವಾಗ್ವಿಲಾಸಿನಿ | ಜಯತು ಸದ್ಗುರು ಶ್ರುತಿ ಶಿರೋಮಣಿ ಕರುಣವಾರಿಧಿಯೇ || ಜಯತು ಕವಿವರ ವ್ಯಾಸ ಮುನಿಪತಿ | ಜಯತು ವಾಲ್