ಪ್ರಕೃತಿ-ಮನುಷ್ಯ

ಅಂದು ಇತ್ತು
ಸುತ್ತ ಹಸಿರು ವನ.
ಇಂದು ಬಿತ್ತು
ಸುತ್ತ ಕಾಂಕ್ರೀಟ್ ಬನ

ಇಳಿಯುತಿದೆ ದಿನವೂ
ಹಸಿರಿನ ಪರಿಮಾಣ.
ಏರುತಲಿದೆ ನಿತ್ಯವೂ
ಹಸಿರು ಮನೆ ಪರಿಣಾಮ.

ಹಸಿರು ಕಡಿಮೆ ಎಂದು
ಉಸಿರು ಕಟ್ಟಿದೆ ಇಂದು 
ನರರ ದುರಾಸೆ ಎಂದು
ಕಾಣೋದು ಅಂತ್ಯದ ಬಿಂದು? 
                      ~ಪ್ರಕಾಶ್ ಮಾಯಣ್ಣವರ್

Comments

Popular posts from this blog

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ವಸಂತಾಗಮನ..

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ