ಗೆಳತಿ ಏನೊಂದೂ ತಿಳಿಯದೆ ನಾನು ಸುಮ್ಮನೆ ನೋಡುತಿಹೆ ಗಗನವನು ನೀ ನನ್ನ ಬಿಟ್ಟು ಹೋದ ಆ ಕ್ಷಣ ನಂಬಲು ತಯಾರಿಲ್ಲ ಈ ಮನ ಹೃದಯ ಹೇಳಿದೆ ಇದು ಬರೀ ಪರಿಹಾಸ ಮಾಡಿಲ್ಲ ನಿನಗವಳು ಯಾವುದೇ ಮೋಸ ಬಲವಾದ ನಂಬಿಕೆ ನನಗೂ ಇದೆಯೊಂದು ನೀ ಮರಳಿ ನನ್ನೆದೆ ಗೂಡ ಬಾಗಿಲು ತಟ್ಟುವೆಯೆಂದು ~ಪ್ರಕಾಶ್
ಹಿತ್ತಿಲಲ್ಲಿ ಹೂ ಬಿಟ್ಟಿದೆ ಬೇವಿನ ಮರ ಮನೆಯ ಡಬ್ಬದಿ ತುಂಬಿದೆ ಬೆಲ್ಲದ ಘಮ ಚಿಗುರ ತೋರಣ ತೊಟ್ಟಿದೆ ಮಾವಿನ ಮರ ದೂರದಲ್ಲಿ ಕೇಳುತಿದೆ ಕೊಕೀಲ ಗಾನ ಪ್ರಕೃತಿ ಕಾದು ನಿಂತಿದೆ ವಸಂತಾಗಮನಕೆ ಉಸಿರು ಬಿಗಿ ಹಿಡಿದು ಕಾಯುತಿದೆ ನೇಗಿಲು ನೂರು ಆಸೆ ಹೊತ್ತಿದೆ ಭೂಮಿಯ ಒಡಲು ನವ ಸಂವತ್ಸರದಿ ಭೂ ತಾಯ ಮಡಿಲು ತುಂಬುವ ಆಶಯದಿ ಬರದ ಕಹಿ ನೆನಪನು ಮರೆಸುವ ಸಿಹಿ ನಾಳೆಗಳು ಬರುವ ಕನಸಲಿ ~ಪ್ರಕಾಶ್
ನಮ್ಮ ದೇಶದ ಸಾಹಿತ್ಯಕ್ಕೆ ರಾಮಾಯಣ, ಮಹಾಭಾರತ ಮೂಲದ್ರವ್ಯ ಎಂದು ಹೇಳಬಹುದು. ನಮ್ಮ ದೇಶದ ಯಾವುದೇ ಊರಿಗೆ ಹೋದರೂ, 'ರಾಮ ಇಲ್ಲಿ ಕೂತಿದ್ದ:, 'ಹನುಮಂತ ಇಲ್ಲಿ ವಿಶ್ರಮಿಸಿದ್ದ', 'ಲಕ್ಷಣ ಇಲ್ಲಿ ಸ್ನಾನ ಮಾಡಿದ್ದ', ಈ ರೀತಿಯ ಹಲವು ಕತೆಗಳಿರುತ್ತವೆ. ಎಲ್ಲರೊಳಗೂ ಆ ಪಾತ್ರಗಳ ಬೆರೆತುಬಿಟ್ಟಿವೆ. ಅವುಗಳಲ್ಲಿನ ಪಾತ್ರಗಳನ್ನು ಪ್ರತಿದಿನ ನಮಗೆ ಗೊತ್ತಿಲ್ಲದೆ ನೆನೆಯುತ್ತಿರುತ್ತೆವೆ. ಇದೇನಿದು 'ಹನುಮಂತನ ಬಾಲ ಇದ್ದ ಹಾಗೇ ಇದೆ', 'ನಿಂದೊಳ್ಳೆ ರಾಮಾಯಣ ಆಯ್ತು', 'ನೀನ್ ಬಿಡಪ್ಪ ಕೃಷ್ಣ ಪರಮಾತ್ಮ', 'ಶಬರಿ ಕಾದಂಗೆ ಕಾದನಲ್ಲೊ' ಹೀಗೆ ಒಂದಿಲ್ಲೊಂದು ಕಡೆ ನಮಗರಿವಿಲ್ಲದಂತೆ ಆ ಪಾತ್ರಗಳನ್ನು ಸ್ಮರಿಸುತ್ತೆವೆ. ಚಿಕ್ಕಂದಿನಿಂದಲೂ ಈ ಮಹಾಕಾವ್ಯಗಳ ಕಥೆಗಳೆಂದರೆ ಒಂದು ರೀತಿಯ ಆಕರ್ಷಣೆ ನನಗೆ, ಟಿವಿಯಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಬೆರಗಾಗಿ ನೋಡುತ್ತಿದ್ದೆ. ಪತ್ರಿಕೆಗಳಲ್ಲಿ ಬರುವ ಈ ಕೃತಿಗಳನ್ನಾಧರಿಸಿದ ಕಿರುಗತೆಗಳನ್ನು ಆಸಕ್ತಿಯಿಂದ ಓದುತ್ತಿದ್ದೆ, 'ಸಂಪೂರ್ಣ ರಾಮಯಣ', 'ಸಂಪೂರ್ಣ ಮಹಾಭಾರತ' ಎಂಬ ಕೆಲ ಪುಸ್ತಕಗಳನ್ನು ಹೈಸ್ಕೂಲಿನಲ್ಲಿ ಓದಿದ್ದೆ, ಇತ್ತೀಚೆಗಂತೂ ತುಂಬಾ ವಿವಾದಗಳು, ಮತದ್ವೇಷಗಳನ್ನು ಕಂಡು ಮತ್ತೊಮ್ಮೆ ರಾಮಾಯಣವನ್ನು ಓದಬೇಕೆನಿಸಿತು, ಆದರೆ ಕುಮಾರವ್ಯಾಸ ಹೇಳುವಂತೆ 'ತಿಣುಕಿದನು ಫಣಿರಾಯ' ಎನ್ನುವಷ್ಟು ರಾಮಯಣಾಧ...
Comments
Post a Comment